ಚೆಲುವ ನಾರಾಯಣ

ಧೂಪ-ದೀಪದಲ್ಲಿದ್ದ
ಹೂವು-ಗಂಧದಲ್ಲಿದ್ದ
ಚೆಲುವ ನಾರಾಯಣ

ಕರ್‍ಪೂರದಾರತಿಯಲ್ಲಿದ್ದ
ಕುಂಕುಮದಕ್ಷತೆಯಲ್ಲಿದ್ದ
ಚೆಲುವ ನಾರಾಯಣ

ಗಂಟೆ ಜಾಗಟೆಯಲ್ಲಿದ್ದ
ಮಂತ್ರ ಘೋಷದಲ್ಲಿದ್ದ
ಚೆಲುವ ನಾರಾಯಣ

ನಿತ್ಯ ಪೂಜೆಯಲ್ಲಿದ್ದ
ಹೊತ್ತ ಹರಕೆಯಲ್ಲಿದ್ದ
ಚೆಲುವ ನಾರಾಯಣ

ಮುದ್ದನುಕ್ಕಿಸುತ್ತಿದ್ದ
ನೆಟ್ಟಗೆ ದಿಟ್ಟಿಸುತ್ತಿದ್ದ
ಮರುಳಾಗದವರುಂಟೆ,
ಚೆಲುವ ನಾರಾಯಣ?

ಮುದ್ದು ಮುಖವನೆ
ನೆನೆದು
ಗಂಡನ ನೆನಪನೆ
ತೊರೆದು
ಕರೆಯಬಹುದೆ
ಚೆಲುವ ನಾರಾಯಣ?

ಮುದ್ದು ಮಗುವಿನ ತಾಯಿ
ಮನಸು
ತತ್ತರಿಸುವ ಹಾಯಿ
ಕರೆಯಬಹುದೆ
ಚೆಲುವ ನಾರಾಯಣ?

ಬಂಧುವನೆ ಬದಿಗಿರಿಸಿ
ಊರ ಮಂದಿಯನೂ
ಕಡೆಗಣಿಸಿ
ಕರೆಯಬಹುದೆ
ಚೆಲುವ ನಾರಾಯಣ?

ಯಾಕೆಂದು ತಿಳಿಯದು
ಏನೊಂದು ಹೊಳೆಯದು
ಒಲವಿನಾವೇಶ!
ವಿವಶಳಾದಳೆ ಅವಳು
ಚೆಲುವ ನಾರಾಯಣ?

ಹೊರಗೇನೂ ಕಾಣಿಸದು
ಒಳಗೇನೊ ಅನಿಸುವುದು
ಅದಕೂ ಅವನೆ ಕಾರಣ
ಚೆಲುವ ನಾರಾಯಣ

ನೆಮ್ಮಿ ನಲುಗಿರಬಹುದು
ಒಲಿದು ಕೆಟ್ಟವರುಂಟೆ?
ಒಲುಮೆ ಇಲ್ಲದಿರೆ
ಅವನ ಮುಟ್ಟುವುದುಂಟೆ?
ಎಂಟೆದೆಯ ತುಂಟನೆ
ಚೆಲುವ ನಾರಾಯಣ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧
Next post ಮೊಗ್ಗು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys